ಪೇರಾಲು ಶಾಲೆಯಲ್ಲಿ ದಸರಾ ನಾಡಹಬ್ಬ
ನಾಡಹಬ್ಬವು
ಸಾಮಾಜಿಕ ಒಗ್ಗಟ್ಟಿಗಾಗಿ, ಅದನ್ನು ಆಚರಣೆ ಮಾಡುವುದರ ಮೂಲಕ ಬಾಂಧವ್ಯಗಳು
ಹೆಚ್ಚಾಗುತ್ತವೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ, ಭಾಷಾ ತಜ್ಞ ಶ್ರೀ ಪ್ರದೀಪ್ ಕುಮಾರ್
ಪೇರಾಲು ನುಡಿದರು. ಅವರು ಪೇರಾಲು ಸರಕಾರಿ ಕಿರಿಯ ಬುನಾದಿ ಶಾಲೆಯ ದಸರಾ ನಾಡಹಬ್ಬ
ಆಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮುಹಮ್ಮದ್
ಪೇರಾಲು ಅಧ್ಯಕ್ಷತೆ ವಹಿಸಿದರು. ಶಾಲಾ ಮುಖ್ಯೋಪಾಧ್ಯಾಯ ಗುರುಮೂರ್ತಿ ಶುಭಹಾರೈಸಿದರು.
ಉದ್ಘಾಟನೆಯ ಅನಂತರ ಮಕ್ಕಳಿಗೆ ಮಂಜಟ್ಟಿ ಕಾಯಿ ಹೆಕ್ಕುವುುದು, ಸಂಗೀತ ಕುರ್ಚಿ, ಅತ್ಯಂತ
ಹೆಚ್ಚು ಮೇಣದ ಬತ್ತಿ ಉರಿಸುವುದು, ಮಡಕೆ ಒಡೆಯುವುದು ಇತ್ಯಾದಿ ಸ್ಪರ್ಧೆಗಳು ಜರಗಿದುವು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಾಮಾಜಿಕ ಕಾರ್ಯಕರ್ತ ರಫೀಕ್ ಪೇರಾಲು ಬಹುಮಾನ ವಿತರಣೆ
ಮಾಡಿದರು. ಅಧ್ಯಾಪಕರಾದ ಸಜಯನ್ ಸ್ವಾಗತಿಸಿ ನೌಫಲ್ ವಂದಿಸಿದರು. HEAD LINE
Saturday 4 November 2017
Subscribe to:
Post Comments (Atom)
No comments:
Post a Comment